ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ


ಮಂಗಳೂರು, ಸೆ.3: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಲ್ಸೂರು ಬೈತಡ್ಕದ ಶ್ರೀನಿವಾಸ ಬಿ.ಆರ್ (48) ಬಂಧಿತ ಆರೋಪಿ. ವಾಹನಗಳನ್ನು ಖರೀದಿಸಲು ಸಾಲ, ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ಟೆಲ್ಕಾನ್ ಇ ಎಕ್ಸ್ 70 ಮೆಶಿನ್ ವಾಹನವನ್ನು ಖರೀದಿಸುವ ಬಗ್ಗೆ 10,00,000 ರೂಪಾಯಿ ಸಾಲ ಪಡೆದಿದ್ದು , ಷರತ್ತಿನಂತೆ ವಾಹನ ಖರೀದಿಸಿದ ಬಳಿಕ ವಾಹನದ ಸಾಲದ ಕಂತನ್ನು ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ಮರುಪಾವತಿಸದೇ ವಂಚಿಸಿರುವುದಾಗಿ ಆರೋಪಿಸಲಾಗಿತ್ತು. ವಾಹನವನ್ನು ತಪಾಸಣೆ ಬಗ್ಗೆ ಹಾಜರುಪಡಿಸಲು ತಿಳಿಸಿದಲ್ಲಿ ವಾಹನ ವನ್ನು ಹಾಜರುಪಡಿಸದೇ ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ವಂಚನೆ ಮಾಡಿರುವ ಬಗ್ಗೆ ಶ್ರೀನಿವಾಸ ಬಿ.ಆರ್. ವಿರುದ್ದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೂರಿನಂತೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಆರೋಪಿ ಶ್ರೀನಿವಾಸ ಬಿ.ಆರ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಮಂಗಳೂರು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಸೆ.2ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ ಎಂಬಲ್ಲಿ ಆರೋಪಿ ಶ್ರೀನಿವಾಸ ಬಿ.ಆರ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



Source link

Leave a Reply

Your email address will not be published. Required fields are marked *